
20th May 2025
ಕುಷ್ಟಗಿ: ಪಟ್ಟಣದ ಎನ್ ಸಿ ಹೆಚ್ ಪ್ಯಾಲೇಸ್ ನಲ್ಲಿ ಇದೇ ಮೇ 22 ರಂದು ಗುರುವಾರ ಬೆಳಿಗ್ಗೆ 08:30 ಗಂಟೆಗೆ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.
ತಾಲೂಕಾಡಳಿತ ಹಾಗೂ ಉಪ್ಪಾರ ಸಮಾಜದ ಸಹಭಾಗಿತ್ವದಲ್ಲಿ ನಡೆಯುವ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿಯ ಅಂಗವಾಗಿ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ 2023-2025 ಅವಧಿಯಲ್ಲಿ ನೂತನವಾಗಿ ಸರಕಾರಿ ನೌಕರಿಗೆ ಆಯ್ಕೆಯಾದ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಪೂರ್ವಕ ಸನ್ಮಾನ ಸಮಾರಂಭ ನಡೆಯಲಿದೆ.
ಹೊಸದುರ್ಗದ ಭಗೀರಥ ಪೀಠದಾಪತಿ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು , ಕಲಬುರ್ಗಿಯ ರಾಂಪೂರಹಳ್ಳಿಯ ಶ್ರೀ ಭಗೀರಥ ಆನಂದಪುರಿ ಮಹಾಸ್ವಾಮಿಗಳು, ಸವದತ್ತಿಯ ವಶಿಷ್ಠಾಶ್ರಮದ ಶ್ರೀ ಭಾರ್ಗವನಂದ ಗಿರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಸಂಸದ ಕೆ ರಾಜಶೇಖರ ಹಿಟ್ನಾಳ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿಳಗಿ ಶಿಕ್ಷಕ ರವಿ ನಾರಾಯಣ ಉಪ್ಪಾರ ರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
GM News Kushtagi.
ಕುಷ್ಟಗಿ ಪಟ್ಟಣದ ಎನ್ ಸಿ ಹೆಚ್ ಪ್ಯಾಲೇಸ್ ನಲ್ಲಿ ಇದೇ ಮೇ 22 ರಂದು ಗುರುವಾರ ಬೆಳಿಗ್ಗೆ 08:30 ಗಂಟೆಗೆ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ